ಬೇನೆ

ಈ ಬಾಗಿಲೀಚೆಗೊಂದು ದೃಶ್ಯ ಆಚೆಗೊಂದ ದೃಶ್ಯ
ಈಚೆಗೆ ಗಿಡಕಂಟಿ, ಹೀಚುಹೂವು, ಮುಳ್ಳು
ಕಾಯಿ ಹಣ್ಣು-ಹುಣ್ಣು ಹುಳು
ಆಚೆಗೆ ತಗ್ಗು ಕರೀ ಕಂದಕ ಹಾಳು ಬಾವಿ
ಹಲವು ಕತ್ತರಿಗಳಿಗೆ ಸಿಕ್ಕಿ ನರಗಳೂಳಿಡುವ
ಕೂಗು ಕತ್ತಲು, ಕೊರಗು ಕತ್ತಲು

ಈ ಮೂಲಕ ಹಾಯ್ದು ಬಂದಾಗಲೆಲ್ಲಾ
ಮೈಗೊಂದು ಹೊಸ ಲೇಪ
ಕಣ್ಣಿಗೂಂದು ಹೊಸ ಚಾಳೀಸು
ಸೃಷ್ಟಿಗೆಲ್ಲ ಒಂದು ಹೊಸ ರೂಪ

ಬಂಡೆ ಕೆಳಗೆ ಜಜ್ಜಿ ಹೋಗಿದ್ದ ಸಸಿ
ಬಂಡೆ ಸರಿಸಿದಾಗ ಮರಳಿ ಉಸಿರಾಡಿ ನಗುವುದು
ಹತ್ತಿರ ಬಂದ ಕೂಡಲೇ ಈ ಬಾಗಿಲು
ಕುಗ್ಗುತ್ತದೆ-ಹಿಚುಕುತ್ತದೆ-ಮುಚ್ಚಿಹಾಕಿಕೊಳ್ಳುತ್ತದೆ
ಕರ್ರಗಾಗುತ್ತದೆ, ಕಣ್ಣು ಕಟ್ಟುತ್ತದೆ

ಸಂದಿನೂಳಗೆ ತೂರಿ ಹಿಗ್ಗಾಮುಗ್ಗಾ ಎಳೆದಾಡಿ
ಕೊನೆಗೆ ಉಸಿರುಸಹಿತ ಹೊರಬಂದರೊಂದು ನವಜೀವನ
ಇದ್ದಕ್ಕಿದ್ದಂತೆ ಫಡಾರೆಂದು ತೆರೆದುಕೊಂಡು
ಹರಿದು ಬರುವುದೊಳಗೆ ಬೆಳಕು
ಹೊರಗೂ ಬೆಳಕು ಹರಿಯುತ್ತದೆ

ಅಲ್ಲಿಗಿಲ್ಲಿಗೆ ಓಡಾಡಲು
ಇದೊಂದೇ ದಾರಿಯಲ್ಲಾ ಎಂಬ ಚಿಂತೆ
ಆದರೂ ಪ್ರತಿ ಬಾರಿಯೂ ಪೂರೆ ಕಳಚಿ
ಹೊಸ ಮೈಪಡೆದು ಹೊರಬರುವ ಹಿಗ್ಗು.
(೨೩-೩-೭೮)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಮ
Next post ಎಂಥಾ ಬೆಪ್ಪು

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys